ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ.
-ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ?
-ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು?
-ಸೂರ್ಯನ ಕಿರಣಗಳು ಮತ್ತು ಶಾಖ ನಮ್ಮ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳನ್ನು ಬೀರುತ್ತಿದೆ?
-ಆಕಾಶದಲ್ಲಿ ಈ ಭೂಮಿ ಕುಸಿಯದೆ, ಸಾವಿರಾರು ವರುಷಗಳಿಂದ ಹೇಗೆ ಜೀವಸಂಕುಲವನ್ನು ರಕ್ಷಿಸುತ್ತಿದೆ?
-ಬೇರೆ ಗ್ರಹಗಳಲ್ಲಿ ಜೀವಿಗಳು ಇದ್ದಾವೆಯೇ? ಅವನ್ನು ಹೇಗೆ ಸಂಪರ್ಕಿಸಬಹುದು?
ಇಂತಹ ಸಾವಿರಾರು ಪ್ರಶ್ನೆಗಳ ಉತ್ತರಗಳು ನಮಗೆ ಗೊತ್ತಿಲ್ಲ. ಅವುಗಳಿಗೆ ಇನ್ನು ನೂರು ವರುಷಗಳೊಳಗೆ ಉತ್ತರ ಸಿಗುವ ಯಾವ ಸೂಚನೆಯೂ ಇಲ್ಲ.
ನಮ್ಮ ದಿನನಿತ್ಯದ ಜೀವನದಲ್ಲಿಯೂ ಹಲವಾರು ಸಂಗತಿಗಳು ನಮಗೆ ವಿಸ್ಮಯ ಹಾಗೂ ನಿಗೂಢ ಅನಿಸುತ್ತವೆ. ಯಾಕೆಂದರೆ ಅವುಗಳ ಬಗ್ಗೆ ಯಾಕೆ? ಏನು? ಹೇಗೆ? ಎಂಬ ಪ್ರಶ್ನೆಗಳಿಗೆ ಯಾವ ಉತ್ತರಗಳೂ ಸಿಗೋದಿಲ್ಲ. ಉದಾಹರಣೆಗೆ, ನಮ್ಮ ಆರೋಗ್ಯ. ಕೊರೋನಾ ವೈರಸ್ ಇಡೀ ಜಗತ್ತಿನಲ್ಲಿ ಮಾನವರ ಮೇಲೆ ಧಾಳಿ ಮಾಡಿ ಏನೆಲ್ಲ ಅನಾಹುತಗಳಿಗೆ ಕಾರಣವಾಯಿತು ಎಂಬುದನ್ನು ಗಮನಿಸಿ. 2020ರಿಂದೀಚೆಗೆ ಕಣ್ಣಿಗೆ ಕಾಣಿಸದ ಈ ವೈರಸ್ ಸೋಂಕು ತಗಲಿದವರ ಸಂಖ್ಯೆ 69 ಕೋಟಿ ದಾಟಿದೆ ಮತ್ತು ಅದಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 68.92 ಲಕ್ಷ. ಮನುಷ್ಯ ಏನೆಲ್ಲ ಕಸರತ್ತು ಮಾಡಿದರೂ ಕೊರೋನಾ ಧಾಳಿಗೆ ಬಲಿಯಾದವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ, ಅಲ್ಲವೇ?
ಈ ಹಿನ್ನೆಲೆಯಲ್ಲಿ ಸಾವಿರಾರು ವರುಷಗಳ ಮುಂಚೆಯೇ ಮನುಷ್ಯನ ಆರೋಗ್ಯ ರಕ್ಷಣೆಗಾಗಿ ಭಾರತದ ಋಷಿಮುನಿಗಳು ಆವಿಷ್ಕರಿಸಿದ ಆಯುರ್ವೇದ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಆಯುರ್ವೇದದ ಬಗ್ಗೆ ಸುಪ್ರಸಿದ್ಧ ಚರಕ ಸಂಹಿತೆ ಮತ್ತು ಸ…
ಮುಂದೆ ಓದಿ...